Thursday, December 16, 2021

ಪದ್ಮಪ್ರಶಸ್ತಿಗಳು ಭಾರತದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, December 16, 2021

Title : ಪದ್ಮಪ್ರಶಸ್ತಿಗಳು ಭಾರತದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ.

(Educational & Informational Purpose Only)



ಪದ್ಮಪ್ರಶಸ್ತಿಗಳು ಭಾರತದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ


ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನೂ ಪ್ರಮುಖ ಪಾತ್ರ ವಹಿಸುತ್ತಾನೆ, ಪ್ರಧಾನಮತ್ರಿ ನರೇಂದ್ರ ಮೋದಿ ಅವರ ಈ ಚಿಂತನೆಯಿಂದಾಗಿ ಅನೇಕ ಅನಾಮಧೇಯ ವ್ಯಕ್ತಿಗಳು 2020 ಮತ್ತು 2021ರ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಲು ಸಾಧ್ಯವಾಯಿತು. ಅವರುಗಳಾರೂ ಯಾವುದೇ ಟಿವಿ, ಪತ್ರಿಕೆಗಳು ಅಥವಾ ಕಾರ್ಯಕ್ರಮದ ಕುತೂಹಲದ ಭಾಗವಲ್ಲ. ಆದರೆ ಈ ಅಪರಿಚಿತ ಮುಖಗಳು ವಿವಿಧ ವಿಭಾಗಗಳಲ್ಲಿ ಮಾಡಿದ ಕೆಲಸ ಪ್ರಭಾವಶಾಲಿ ಪಟ್ಟಿ ಸೇರಿವೆ. ಈಗ ಪದ್ಮ ಪ್ರಶಸ್ತಿಗಳು ಜನ ಪ್ರಶಸ್ತಿಗಳಾಗಿ ಪರಿವರ್ತನೆಗೊಂಡಿವೆ. ನವ ಭಾರತದಲ್ಲಿ, ದೇಶದ ಸಾಮಾನ್ಯ ನಾಗರಿಕರು

ತಮ್ಮ ವಿಶಿಷ್ಟ ಕಾರ್ಯದ ಮೂಲಕ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆಯಬಹುದು. ಯಾವುದೇ ನಾಗರಿಕನು

ಪದ್ಮ ಪ್ರಶಸ್ತಿಗಳಿಗೆ ಯಾರನ್ನಾದರೂ ನಾಮನಿರ್ದೇಶನ ಮಾಡಬಹುದು.



77 ವರ್ಷದ ತುಳಸಿಗೌಡ ಅವರು 30 ಸಾವಿರಕ್ಕೂ ಹೆಚ್ಚು ನಸಿಗಳನ್ನು ನಡುವ ಮೂಲಕ ಪರಿಸರ ಉಳಿಸುವ ಅಭಿಯಾನ ನಡೆಸುತ್ತಿದ್ದಾರೆ. ಕರ್ನಾಟಕದ ಜನರು ಅವರನ್ನು 'ಅರಣ್ಯದ ವಿಶ್ವಕೋಶ' ಎಂದು ಗುರುತಿಸಿದ್ದಾರೆ.



ಮಂಗಳೂರಿನ 68 ವರ್ಷದ ಹಣ್ಣು ಮಾರಾಟಗಾರ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಬೆರಗು ಗೊಳಿಸುತ್ತದೆ. ಕಿತ್ತಳೆ ಹಣ್ಣು ಮಾರಾಟ ಮಾಡಿ ದಿನಕ್ಕೆ 150 ರೂ. ಸಂಪಾದಿಸುವ ಇವರು, ತಮ್ಮ ಸಂಪಾದನೆಯಿಂದ ಪ್ರಾಥಮಿಕ ಶಾಲೆ ಕಟ್ಟಿಸಿದ್ದಾರೆ.


Publish Date : 2021


Daily Quiz Telegram Group - @kpsc2019



ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿಯಾದ ಹಿಮ್ಮತ್ ರಾಮ್ ಭಂಭು ಕಳೆದ 25 ವರ್ಷಗಳಿಂದ ವೃಕ್ಷ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ರಾಜಸ್ಥಾನದ ಅರಣ್ಯ ಕೊರತೆಯ ಜಿಲ್ಲೆಗಳಾದ ನಗೌರ್, ಜೋದ್ ಪುರ, ಜೈಸರ್, ಬಾರ್ಮರ್, ಸಿಕರ್, ಅಶ್ಲೋರ್ ನಲ್ಲಿ ಅವರು ಇಲ್ಲಿಯವರೆಗೆ ಐದೂವರೆ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.


File Size : link


Number of Pages : link



ಭೂರಿ ಬಾಯಿ ಒಂದು ಕಾಲದಲ್ಲಿ ಕೆಲಸ ಮಾಡುತ್ತಿದ್ದ ಭೋಪಾಲ್ ನ ಭಾರತ್ ಭವನವನ್ನು ಈಗ ಅವರ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ. ಗೋಡೆಗಳು ಮತ್ತು ಕ್ಯಾನ್ವಾಸ್ ಗಳ ಮೇಲೆ ಭಿಲ್ ಬುಡಕಟ್ಟಿನ ಕೆತ್ತನೆಯ ಕಲೆಯನ್ನು ಅವರು ಜೀವಂತಗೊಳಿಸಿದ್ದಾರೆ. ಮಧ್ಯಪ್ರದೇಶ ಮ್ಯೂಸಿಯಂನಿಂದ ಅಮೆರಿಕದವರೆಗೆ ಅವರ ವರ್ಣಚಿತ್ರಗಳು ಜನಪ್ರಿಯವಾಗಿವೆ.

“ ಕಲೆಯ ಪ್ರಚಾರಕ್ಕಾಗಿ ನಾನು ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. 66 ಇಂದು ನನ್ನ ಒಂದು ವರ್ಣಚಿತ್ರವು ನನ್ನನ್ನು ಕಾರ್ಮಿಕನಿಂದ ಕಲಾವಿದಳನ್ನಾಗಿ ಮಾಡಿತು. ನನಗೆ ಇಷ್ಟು ದೊಡ್ಡ ಗೌರವ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.


Editable Text : No



ದಳವಾಯಿ ಛಲಪತಿ ರಾವ್ ಅನಂತಪುರ ಜಿಲ್ಲೆಯ ತೊಗಲು ಗೊಂಬೆ ಕಲಾವಿದರು. ತಲೆಮಾರುಗಳಿಂದ ಬಂದ ನೆರಳು ಬೊಂಬೆಯಾಟ ಕಲೆಯನ್ನು ಅಂದಗೊಳಿಸುವ ಮತ್ತು ಬೆಳೆಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.


Image Available : Yes



ಬೀಜ ಮಾತ ಅಥವಾ ಸೀಡ್ ಮದರ್ ಎಂದು ಜನಪ್ರಿಯವಾಗಿರುವ ರಾಹಿಬಾಯಿ ಸೋಮಾ ಪೋಪರ ಮಹಾರಾಷ್ಟ್ರದ ಅಹ್ಮದ್ ನಗರ ಮೂಲದವರು. ಪಾರಂಪರಿಕವಾಗಿ ಸಾಂಪ್ರದಾಯಿಕ ಕೃಷಿ ವಿಧಾನಗಳನ್ನು ಕಲಿತಿರುವ ಅವರು, 50 ಎಕರೆ ಭೂಮಿಯಲ್ಲಿ 17ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಹಿ ತಮ್ಮ ಪ್ರಯತ್ನಗಳಿಗಾಗಿ ನಾರಿ ಶಕ್ತಿ ಸಮ್ಮಾನ್‌ಗೂ ಭಾಜನರಾಗಿದ್ದಾರೆ. ವಿಜ್ಞಾನಿಗಳು ಸಹ ಅವರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ.



ಕರ್ನಾಟಕದ ಮಂಜಮ್ಮ ಜೋಗತಿ ಅವರು ಪದ್ಮ ಪ್ರಶಸ್ತಿ ಪಡೆದ ದೇಶದ ಮೊದಲ ತೃತೀಯ ಲಿಂಗಿಯಾಗಿದ್ದಾರೆ. ಅವರ ಜೀವನವು ಅನೇಕ ಕಠಿಣ ಹಂತಗಳನ್ನು ಹಾದುಹೋಗಿದೆ. ಜೋಗಪ್ಪ ಸಮುದಾಯದ ಜಾನಪದ ನೃತ್ಯವಾದ ಮಂಜಮ್ಮ, ಈಗ ಅವರ ಹೆಸರಿನಿಂದ ಗುರುತಿಸಲ್ಪಟ್ಟಿದೆ, ಅದನ್ನು ಅವರು ಜನಪ್ರಿಯಗೊಳಿಸಿದ್ದಾರೆ.



ಅಯೋಧ್ಯೆಯ ನಿವಾಸಿ 83 ವರ್ಷದ ಸೈಕಲ್ ಮೆಕ್ಯಾನಿಕ್ ಮೊಹಮ್ಮದ್ ಶರೀಫ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾಜ ಕಲ್ಯಾಣಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಶರೀಫ್‌ ಚಾಚಾ ಎಂದು ಜನಪ್ರಿಯವಾಗಿರುವ ಮೊಹಮ್ಮದ್ ಶರೀಫ್ ಇಲ್ಲಿಯವರೆಗೆ 25ಸಾವಿರಕ್ಕೂ ಹೆಚ್ಚು ವಾರಸುದಾರರಿಲ್ಲದ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ದೇಶದ ಪ್ರತಿಷ್ಠಿತ ಗೌರವ ಪಡೆದ ನಂತರ, ಮೋದಿ ಸರ್ಕಾರದಲ್ಲಿ ಸಮಾಜ ಸೇವೆಗೆ ಬೆಲೆ ಇದೆ ಎಂದು ನಾನು ಈಗ ಅರಿತುಕೊಳ್ಳುತ್ತಿದ್ದೇನೆ. 28 ವರ್ಷಗಳ ಸೇವೆಗೆ ಪ್ರತಿಫಲ ಸಿಕ್ಕಿದೆ. ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ, ನಾನು ವಾರಸುದಾರರಿಲ್ಲದ ಮೃತ ದೇಹಗಳ ಅಂತ್ಯಕ್ರಿಯೆ ಮುಂದುವರಿಸುತ್ತೇನೆ.



ಜನರು ಸಜ್ಜಾದ್ ಅಲಿ ಜಹೀರ್ ಅವರನ್ನು 1971ರ ಯುದ್ಧದ ನಾಯಕ ಎಂದು ಕರೆಯುತ್ತಾರೆ. ಆ ಸಮಯದಲ್ಲಿ ಪಾಕಿಸ್ತಾನ ಸೇನೆಯಲ್ಲಿದ್ದ ಜಹೀರ್, ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಸೇನಾ ದೌರ್ಜನ್ಯ ಮತ್ತು ನರಮೇಧದ ಪುರಾವೆಗಳೊಂದಿಗೆ ಭಾರತಕ್ಕೆ ಬಂದಿದ್ದರು. ಬಾಂಗ್ಲಾದೇಶದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವರ್ಷಗಳ ನಂತರ, ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಪದ್ಮ ಪ್ರಶಸ್ತಿಗಳಿಂದ ಗೌರವಿಸಲಾದ ರಾಜಸ್ಥಾನದ ರತ್ನಗಳಲ್ಲಿ ಉಷಾ ಚೌಮಾರ್ ಸಹ ಒಬ್ಬರು. ರಾಷ್ಟ್ರಪತಿಗಳಿಂದ ಗೌರವ ಪಡೆದ ಉಷಾ ಚೌಮಾರ್ ಒಂದು ಕಾಲದಲ್ಲಿ ಕೈಯಿಂದ ಮಲ ಸ್ವಚ್ಛ ಮಾಡುವವರಾಗಿದ್ದರು. 7ನೇ ವಯಸ್ಸಿನಿಂದಲೂ ಕೈಯಿಂದ ಮಲ ಸ್ವಚ್ಛ ಮಾಡುತ್ತಿದ್ದ ಉಷಾ, ಮಲ ಹೊರುವ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡಿ ಹೊಸ ಮಾದರಿಯನ್ನು ರೂಪಿಸಿದರು.



ಛುಲ್ಲಿಮ್ ಛೋಂಜೋರ್ ಅವರನ್ನು ಲಡಾಖ್ ನ 'ದಶರಥ ಮಾಂಝಿ' ಎಂದೂ ಕರೆಯಲಾಗುತ್ತದೆ. ಲಡಾಖ್ ನ ಜಂಸ್ಕಾರ್ ಕಣಿವೆಯ ಸ್ಪೋಂಗ್ಲ ಗ್ರಾಮದ ನಿವಾಸಿ ಛುಲ್ಲಿಮ್ ಛೋಂಜೋರ್ ಅವರು ದಾರ್ಚಾದಿಂದ ಶಿಂಕುಲಕ್ಕೆ ಸುಮಾರು 40 ಕಿ.ಮೀ. ರಸ್ತೆಯನ್ನು ಏಕಾಂಗಿಯಾಗಿ ನಿರ್ಮಿಸಿದ್ದಾರೆ. ಇದಕ್ಕಾಗಿ, ಅವರು ತಮ್ಮ ಭೂಮಿ ಮತ್ತು ಆಸ್ತಿಯನ್ನು ಸಹ ಮಾರಾಟ ಮಾಡಿದ್ದಾರೆ.


ಪದ್ಮ ಪ್ರಶಸ್ತಿ ಪಡೆದ ನಂತರ, ಬಹುಶಃ ನನ್ನ ಕಠಿಣ ಪರಿಶ್ರಮ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇನೆ. ನಾನು ರಸ್ತೆಯನ್ನು ನಿರ್ಮಿಸುವಾಗ, ಇದು ಸಾಧ್ಯ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ. 

Click Here To Download



ಸುಮಾರು ಮೂರು ದಶಕಗಳ ಕಾಲ, ಮನೆಗೆಲಸದಾಕೆಯಾಗಿ ಮತ್ತು ತರಕಾರಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದ ಸುಭಾಷಿಣಿ, ಯಾವುದೇ ಬಡ ರೋಗಿಯೂ ಚಿಕಿತ್ಸೆ ಸಿಗದೆ ಸಾಯಬಾರದು ಎಂದು ಬಂಗಾಳದ ದಕ್ಷಿಣ -24 ಪರಗನಾ ಜಿಲ್ಲೆಯ ಠಾಕೂರ್ ಪುಶುರ್ ಪ್ರದೇಶದಲ್ಲಿ 'ಮಾನವೀಯತೆಯ ಅಸ್ಪತ್ರೆ' ಸ್ಥಾಪಿಸಲು ಹಣವನ್ನು ಉಳಿಸಿದರು. ಇಲ್ಲಿ ಎಲ್ಲಾ ಚಿಕಿತ್ಸೆಯನ್ನೂ ಉಚಿತವಾಗಿ ನೀಡಲಾಗುತ್ತದೆ.


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. Allthese PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪದ್ಮಪ್ರಶಸ್ತಿಗಳು ಭಾರತದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.