Title : ಭಾರತದ ಸಂವಿಧಾನ ಭಾರತದ ಸಂವಿಧಾನ (Indian Constitution)
(Educational & Informational Purpose Only)
ಭಾರತದ ಸಂವಿಧಾನ ಭಾರತದ ಸಂವಿಧಾನ (Indian Constitution)
ಭಾರತದ ಸಂವಿಧಾನವು ಲಿಖಿತ ರೂಪದ ಸಂವಿಧಾನವಾಗಿದ್ದು, ಜನವರಿ 11, 1950ರಂದು ಜಾರಿಗೆ ಬಂದಿದೆ. ಈ ಸಂವಿಧಾನವನ್ನು ರಚಿಸಲು 2 ವರ್ಷ, II ತಿಂಗಳು, 18 ದಿನಗಳು ಬೇಕಾದವು. ಆ ಸಂದರ್ಭದಲ್ಲಿ ಸಂವಿಧಾನ ರಚಿಸಲು 6 ಕೋಟಿ 40 ಲಕ್ಷ ರೂ. ಖರ್ಚು ಮಾಡಲಾಗಿದೆ.
ಮೂಲ ಸಂವಿಧಾನವು 22 ಅಧ್ಯಾಯಗಳು, 305 ಕಲಂಗಳು, 8 ಅನುಸೂಚಿಗಳನ್ನು ಒಳಗೊಂಡಿತ್ತು. ಪ್ರಸ್ತುತದಲ್ಲಿ 24 ಭಾಗಗಳು, 448 ಕಲಂಗಳು, 12 ಅನುಸೂಚಿಗಳನ್ನು ಹೊಂದಿದೆ. ಸಂವಿಧಾನವನ್ನು 'ಭಾರತದ ಸಂವಿಧಾನ' ಎಂದು ಕರೆಯಬೇಕೆಂದು ಸಂವಿಧಾನದ 22 ನೇ ಭಾಗದ 393ನೇ ವಿಧಿಯಲ್ಲಿ ಹೇಳಲಾಗಿದೆ. ಭಾರತದ ಸಂವಿಧಾನವು ಬೃಹತ್ ಮಾದರಿಯ ಸಂವಿಧಾನಗಳಲ್ಲಿ ಒಂದಾಗಿದೆ.
ಭಾರತದ ಸಂವಿಧಾನ ಬೆಳೆದು ಬಂದ ಹಾದಿ
ಸಂವಿಧಾನ ರಚನಾಸಭೆಯ ಪರಿಕಲ್ಪನೆ ಪಾಶ್ಚಿಮಾತ್ಯ ಮೂಲದ್ದಾಗಿದೆ. ಸಂವಿಧಾನ ಸಭೆಯನ್ನು ರೂಪಿಸುವ ಮುಖ್ಯ ಪ್ರಯತ್ನ ಅಮೆರಿಕದ ಸಂವಿಧಾನ ಬರೆಯುವಾಗ ನಡೆಯಿತು. ಅಮೆರಿಕದ ಸ್ವಾತಂತ್ರ್ಯ ಸಮರದ ನಂತರ 1787ರ ಫಿಲಡೆಲ್ಸಿಯಾ ಸಮ್ಮೇಳನದಲ್ಲಿ ಅಮೆರಿಕ ಸಂವಿಧಾನವನ್ನು ರಚಿಸಿತು. ಫ್ರೆಂಚ್ ಕ್ರಾಂತಿಯ ನಂತರ ಫ್ರಾನ್ಸಿನ ರಾಷ್ಟ್ರೀಯ ಸಭೆ (1789-91) ಫ್ರೆಂಚ್ ಸಂವಿಧಾನವನ್ನು ರಚಿಸಿತು. ಮುಂದೆ ಭಾರತವು ಬ್ರಿಟಿಷರ ಸಹಾಯದೊಡನೆ ಸಂವಿಧಾನ ಸಭೆಯನ್ನು ರೂಪಿಸಿ ಡಿಸೆಂಬರ್ 9, 1946ರಿಂದ ನವೆಂಬರ್ 26, 1949 ರ ನಡುವೆ ದೇಶದ ಪರಮೋಚ್ಚ ಕಾನೂನಾದ ಭಾರತದ ಸಂವಿಧಾನವನ್ನು ರಚಿಸಿತು.
ಸಂವಿಧಾನ ರಚನೆಯಲ್ಲಿ ಡಾ. ಅಂಬೇಡ್ಕರ್ರ ಪಾತ್ರ ಇವುಗಳ ಸಂವಿಧಾನ
ಡಾ. ಬಿ. ಆರ್. ಅಂಬೇಡ್ಕರ್ವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅವರನ್ನು ಆಧುನಿಕ ಮನು, ದಲಿತರ ಸೂರ, ಸಂವಿಧಾನ ಶಿಲ್ಪಿ ಎಂದೂ ಸಹ ಕರೆಯುವರು.ಭಾರತದ ಸಂವಿಧಾನದ ಕರಡನ್ನು ಪರಿಶೀಲಿಸಿ ಅಂತಿಮ ರೂಪ ನೀಡುವಲ್ಲಿ ಇವರು ಸ್ಮರಣೀಯರಾಗಿದ್ದಾರೆ. ಸಂವಿಧಾನ ಅಂಬೇಡ್ಕರ್ರು ಬಂಗಾಲದಿಂದ ಆಯ್ಕೆಯಾದರು. ರಚನಾಸಭೆಗೆ ಜವಾಹರ್ಲಾಲ್ ನೆಹರು ಹಾಗೂ ಸರ್ದಾರ ಪಟೇಲರು ಶ್ರೇಷ್ಠ ಸಂವಿಧಾನ ತಜ್ಞಐವರ್ ಜೆನ್ನಿಂಗ್ರನ್ನು ಸಂವಿಧಾನ ರಚನೆ ಬಗ್ಗೆ ಸಲಹೆ ಕೇಳಲು ಆಮಂತ್ರಿಸಬೇಕೆಂದರು. ಆದರೆ ಮಹಾತ್ಮ ಗಾಂಧೀಜಿಯವರು ವಿದೇಶಿ ತಜ್ಞರನ್ನು ಕರೆಯುವುದಕ್ಕಿಂತ ಸ್ವದೇಶಿ ತಜ್ಞರನ್ನು ಹುಡುಕಿ ಆಯ್ಕೆ ಮಾಡಲು ಸೂಚಿಸಿದರು. ಅಂತಿಮವಾಗಿ
File Type : See Link
File Language : Kannada/English
State : Karnataka
Publish Date : 2021
Daily Quiz Telegram Group - @kpsc2019
File Format : PDF
File Size : link
ಸಂವಿಧಾನದ ಕರಡು ತಿದ್ದಲು ಅಧ್ಯಕ್ಷರಾಗಿ ಡಾ. ಅಂಬೇಡ್ಕರ್ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂವಿಧಾನದ ಕರಡು ರಚನಾ ಸಭೆ ಸುಮಾರು 177 ದಿನಗಳವರೆಗೆ ಜರುಗಿ ಸಮಾಲೋಚಿಸಿ ಸಂವಿಧಾನದ ಕರಡು ಸಮಿತಿಯು ತನ್ನ ವರದಿಯನ್ನು ಜನರ ಅವಗಾಹನೆಗೆ ತೆರೆದಿಡಲಟ್ಟಿತು. ಜನಾಭಿಪ್ರಾಯದ ಆಧಾರದ ಮೇಲೆ ಸಂವಿಧಾನದ ಮೇಲಿನ ಚರ್ಚೆಗಳು 1948 ನವೆಂಬರ್ 4 ರಿಂದ ಪಾರಂಭಗೊಂಡು 1949 ರ ಅಕ್ಟೋಬರ್ 17 ರವರೆಗೆ ನಡೆದವು. ಈ ಸಭೆಯಲ್ಲಿ ಮಂಡಿಸಿದ 7635 ತಿದ್ದುಪಡಿಗಳಲ್ಲಿ 2473 ತಿದ್ದುಪಡಿಗಳ ಮೇಲೆ ಸಮಗ್ರ ಚರ್ಚೆ ನಡೆದವು, ಆಗ ಅಂಬೇಡ್ಕರ್ ಅವರು ಸದಸ್ಯರ ಸಂದೇಹ, ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಮರ್ಥಿಸಿಕೊಳ್ಳುತ್ತಿದ್ದರು. ಸುಮಾರು 144 ದಿನಗಳ ಕಾಲಾವಧಿ ತೆಗೆದುಕೊಂಡು ಅಂತಿಮವಾಗಿ 395 ವಿಧಿಗಳನ್ನೊಳಗೊಂಡ ಸಂವಿಧಾನವನ್ನು ರೂಪಿಸಿದರು.
ಸಂವಿಧಾನ ರಚನಾ ಸಭೆ (Constituent Assembly)
ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತೀಯರು ತಮ್ಮದೇ ಆದ ಸಂವಿಧಾನಕ್ಕಾಗಿ ಆಗ್ರಹಿಸಿದ್ದರು. ಡಿಸೆಂಬರ್ 18, 1935 ರ ಪ್ರಜಾಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂವಿಧಾನ ರಚನಾ ಸಮಿತಿಯು ಸ್ಥಾಪನೆಯಾಗಬೇಕೆಂಬ ಬೇಡಿಕೆಯನ್ನು ಮಂಡಿಸಿತ್ತು. ಸ್ವತಂತ್ರ ಭಾರತಕ್ಕೊಂದು ಹೊಸ ಸಂವಿಧಾನದ ಅಗತ್ಯವನ್ನು ಮನಗಂಡ ಹಿರಿಯರು ಸಂವಿಧಾನ ರಚನೆಗೆ ಮುಂದಾದರು. ಮುಂದೆ 1946ನೇ ಡಿಸೆಂಬರ್ 9ರಂದು ಬೆಳಗ್ಗೆ 11 ಗಂಟೆಗೆ ಸಂವಿಧಾನ ರಚನೆಗೆ ಸಂಬಂಧಿತ ಮೊದಲ ಸಭೆ ಸಮಾವೇಶಗೊಂಡಿತು. ಕಾಂಗ್ರೆಸ್ಸಿನ ಅಧ್ಯಕ್ಷರಾದ ಕೃಪಲಾನಿಯವರ ಕೋರಿಕೆಯ ಮೇರೆಗೆ ಸಭೆಯ ಅಧ್ಯಕ್ಷತೆಯನ್ನು ಡಾ. ಸಚ್ಚಿದಾನಂದ ಸಿನ್ಹಾ ವಹಿಸಿದರು. ಸಂವಿಧಾನ ರಚನಾ ಸಭೆಯ ಎರಡನೇ ಅಧಿವೇಶನವು ಡಿಸೆಂಬರ್ II, 1946 ರಂದು ನಡೆಯಿತು. ಈ ಸಭೆಯಲ್ಲಿ ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರನ್ನಾಗಿ ರಾಜೇಂದ್ರ ಅವರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಟಿ. ಟಿ. ಕೃಷ್ಣಮಾಚಾರಿ, ಎಚ್.ಸಿ. ಮುಖರ್ಜಿಯವರನ್ನು ನೇಮಿಸಲಾಯಿತು. ಇವರನ್ನು ನೇಮಿಸಿದ ನಂತರ, ಸಂವಿಧಾನದ ರಚನಾ ಕಾರ್ಯ ಪ್ರಾರಂಭವಾಯಿತು. ಸಂವಿಧಾನದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಸಂವಿಧಾನ ರಚನಾ ಸಭೆಯ 22 ಸಮಿತಿಗಳನ್ನು ಹಾಗೂ 5 ಉಪ ಸಮಿತಿಗಳನ್ನು ರಚಿಸಿತು. ನೆಹರೂರವರು 1946 ರಲ್ಲಿ ಸಂವಿಧಾನ ರಚನೆಯ ಧೈಯೋದ್ದೇಶಗಳ ಗೊತ್ತುವಳಿ ಮಂಡಿಸಿದರು.
ಇದು ರಚನಾ ಸಭೆಯಲ್ಲಿ ಜನವರಿ 22, 1947 ಸ್ವೀಕೃತಗೊಂಡ ನಂತರ ಇದರ ಅಡಿಪಾಯದ ಮೇಲೆ ಸ೦ವಿಧಾನದ ಸೌಧ ನಿರ್ಮಾಣಗೊಂಡಿತು. ಟಿ. ಟಿ. ಕೃಷ್ಣಮಾಚಾರಿ
The Classic KAS & IAS
Number of Pages : link
Scanned Copy : Yes
Editable Text : No
Password Protected : No
Image Available : Yes
Download Link Available : Yes
File size Reduced : No
ಸಂವಿಧಾನ ರಚನಾ ಸಭೆಯ ಕಾರ್ಯ ರೀತಿ
ಸಂವಿಧಾನ ರಚನಾ ಸಮಿತಿಯ ವಿವಿಧ ಸಮಿತಿಗಳು 1947 ಆಗಸ್ಟ್ ತಿಂಗಳ ಅವಧಿಯಲ್ಲಿ ತಮ್ಮ ವರದಿಗಳನ್ನು ಸಿದ್ಧಪಡಿಸಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಿಗೆ ಒಪ್ಪಿಸಿದವು, ವಿವಿಧ ಸಮಿತಿಗಳು ಸ೦ವಿಧಾನವನ್ನು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಸಂವಿಧಾನ ಕರಡು ಪ್ರತಿಯನ್ನು ಸಂವಿಧಾನ ರಚನಾ ಸಭೆ ಸದಸ್ಯರು ಹಾಗೂ ಸಲಹೆಗಾರರಾಗಿದ್ದ ಪರಿಶೀಲಿಸಲು ಅಂಬೇಡ್ಕರ್ವರ ಅಧ್ಯಕ್ಷತೆಯಲ್ಲಿ ಆಗಸ್ 29. 1947 ತಂದು ರಚಿಸಲಾಯಿತು. ಸದಸ್ಯರಾಗಿ ಕೆ. ಸಮಿತಿಯನ್ನು ಈ ಸಮಿತಿಯಲ್ಲಿ ಎಂ. ಮುನ್ನ, ಗೋಪಾಲಸ್ವಾಮಿ ಐಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಮಹಮ್ಮದ್ ಮತ್ತು ನೇಮಕಗೊಂಡರು. ನಂತರದಲ್ಲಿ ಬಿ. ಎಲ್. ಮಿತ್ತರ್ ಸ್ಥಾನದಲ್ಲಿ ಎನ್. ಮಾಧವರಾವ್, ಡಿ. ಪಿ. ಬೇತಾನ್ರ ಸ್ಥಾನಕ್ಕೆ ಟಿ. ಟಿ. ಕೃಷ್ಣಮಾಚಾರಿಯವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಕರಡು ಪರಿಶೀಲನಾ ಸಭೆಯಲ್ಲಿ ಅಂಬೇಡ್ಕರ್ 208 1 ಒಟ್ಟು ಕೊಡುತ್ತಿದ್ದ ಸ್ಪಷ್ಟಿಕರಣ ಹಾಗೂ ವಿವರಗಳು ಎಲ್ಲರ ಗಮನ ಸೆಳೆದವು. ಹೀಗಾಗಿ ಇವರನ್ನು ಎಂ. ವಿ. ಪೈಲಿ ಅವರು 'ಭಾರತದ ಸಂವಿಧಾನದ ಶಿಲ್ಪಿ' ಎಂದು ಕರೆದರು.
ಪ್ರಥಮ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಪಕ್ಷಗಳ ಸದಸ್ಯರು ಬಿ.ಎನ್. ರಾವ್ ಅವರು ಸಿದ್ಧಪಡಿಸಿದರು.
ಸ್ಥಾನದ ಸಂಖ್ಯೆ
#ಕಾಂಗ್ರೆಸ್ - 208
# ಮುಸ್ಲಿಂ ಲೀಗ್ (ಹಾಜರಿದ್ದಿಲ್ಲ) - 73
#ಯೂನಿಯನಿಸ್ಟ್ - 1
#ಯೂನಿಯನಿಸ್ಸ ಮುಸ್ಲಿಂ - 1
#ಈ ಯೂನಿಯನಿಸ್ಟ್ ಅನುಸೂಚಿತ ಜಾತಿ |
# ಕೃಷಿಕ ಪ್ರಜಾ - 1
# ಅನುಸೂಚಿತ ಜಾತಿಗಳು (ಸಂಯುಕ್ತ) 1
# ಸಿಖ್ (ಕಾಂಗ್ರೆಸ್ಸೇತರ) - 1
# ಕಮ್ಯೂನಿಸ್ಟ್ -
#ಸ್ವತಂತ್ರ ಅಭ್ಯರ್ಥಿಗಳು - 8
ಒಟ್ಟು - 296
ಕರಡು ಸಂವಿಧಾನದ ಮೇಲಿನ ಚರ್ಚೆಯು 1948 ನವೆಂಬರ್ 4 ರಿಂದ ಪ್ರಾರಂಭಗೊಂಡು 1949 ರ ಅಕ್ಟೋಬರ್ 17 ರ ವರೆಗೆ ನಡೆಯಿತು. ಈ ಸಭೆಯಲ್ಲಿ ಅನೇಕ ಸದಸ್ಯರು ತಮ್ಮ ಸಲಹೆಗಳನ್ನು ನೀಡಿದರು. ರಚನಾ ಸಭೆಯು ಒಟ್ಟು 2 ವರ್ಷ 11 ತಿಂಗಳು, 18 ದಿನಗಳವರೆಗೆ ಅಸ್ತಿತ್ವದಲ್ಲಿದ್ದು, ರಚನಾ ಕಾರ್ಯವನ್ನು ಪೂರ್ಣಗೊಳಿಸಿತು.
ಸಂವಿಧಾನದ 394 ನೇ ವಿಧಿ ಪ್ರಕಾರ 5, 6, 7, 8,9, 60, 324, 366, 367, 379, 380, 388, 391, 392, 393 ಮತ್ತು 394 ನೇ ವಿಧಿಗಳು ಅಂಗೀಕರಿಸಿದ ದಿನದಿಂದಲೇ ಜಾರಿಗೆ ಬಂದವು, ಆದರೆ `ಉಳಿದ ವಿಧಿಗಳನ್ನು ಜನವರಿ 26, 1950 ರಂದು ಜಾರಿಗೆ ತಂದಿತು. ಅಂದಿನಿಂದಲೇ ಸಂವಿಧಾನ ಜಾರಿಗೆ ಬಂದ ದಿವಸ ಎಂದು ಪರಿಗಣಿಸಲಾಗಿದೆ. ಏಕೆಂದರೆ 1930 ಜನವರಿ 26 ರಂದು ರಾಷ್ಟ್ರೀಯ ಕಾಂಗ್ರೆಸ್ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪಡೆಯುವ ಘೋಷಣೆ ಅಂಗೀಕರಿಸಿತು. ಅದರ ಸವಿನೆನಪಿಗಾಗಿ ಜನವರಿ 26 ರನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ರಾಷ್ಟ್ರಧ್ವಜವನ್ನು ಜುಲೈ 22, 1947 ರಂದು ಅಂಗೀಕರಿಸಲಾಗಿದೆ.
Password : No
Cost : Free of cost
For Personal Use Only
Click Here To Download
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment